ಕರ್ನಾಟಕ ರಾಜ್ಯೋತ್ಸವ ದಿನ



ಕರ್ನಾಟಕ ತನ್ನ 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಸಜ್ಜಾಗಿದೆ. ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕ ರಚನೆ ದಿನ ಅಥವಾ ಕರ್ನಾಟಕ ದಿನ ಎಂದು ಕರೆಯಲಾಗುತ್ತದೆ. ಈ ದಿನವನ್ನು ಎಲ್ಲಾ ಕನ್ನಡಿಗರು ಅತ್ಯಂತ ಅದ್ಧೂರಿಯಾಗಿ ಆಚರಿಸುತ್ತಾರೆ.

ರಾಜ್ಯೋತ್ಸವ ಪ್ರತಿ ವರ್ಷ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಈ ದಿನ ಕರ್ನಾಟಕದ ರಚನೆಯಾಯಿತು. 1956 ರಲ್ಲಿ ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳು ಒಗ್ಗೂಡಿ ಒಂದು ರಾಜ್ಯವಾದಾಗ ಈ ದಿನವು ವಾಸ್ತವಕ್ಕೆ ಬಂದಿತು. ಮೊದಲಿಗೆ ಇದನ್ನು ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು ಆದರೆ ನಂತರ ಅದು ಕರ್ನಾಟಕ ಎಂದು ಹೆಸರು ಬದಲಾಯಿತು ಮತ್ತು ಅಂದಿನಿಂದ, ಈ ದಿನವನ್ನು ಕರ್ನಾಟಕ ರಾಜ್ಯ ದಿನವೆಂದು ಘೋಷಿಸಲಾಗಿದೆ.

ಈ ದಿನವನ್ನು ಕನ್ನಡಿಗರು ಬಹಳ ಗೌರವ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ.ಈ ದಿನದಂದು ಕನ್ನಡಿಗರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸುತ್ತಾರೆ ಮತ್ತು ಕನ್ನಡ ರಾಜ್ಯ ಧ್ವಜವನ್ನು ಹಾರಿಸುತ್ತಾರೆ. ಕರ್ನಾಟಕದ ಧ್ವಜವು ಹಳದಿ ಮತ್ತು ಕೆಂಪು ಎಂಬ ಎರಡು ಬಣ್ಣಗಳನ್ನು ಹೊಂದಿದೆ ಮತ್ತು ಅವರು ಜೈ ಭಾರತ್ ಜನನಿಯ ತನುಜಾತೆ ಎಂದು ತಮ್ಮ ಕನ್ನಡ ಗೀತೆಯನ್ನು ಹಾಡುತ್ತಾರೆ.

ಕರ್ನಾಟಕದ ಏಕೀಕರಣದಲ್ಲಿ ಆಲೂರು ವೆಂಕಟರಾವ್ ಪ್ರಮುಖ ಪಾತ್ರ ವಹಿಸಿದ್ದರು. ಗುದ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಾಂಬ್ಳಿ, ಆರ್.ಎಚ್.ದೇಶಪಾಂಡೆ, ರಂಗರಾವ್ ದಿವಾಕರ್, ಕೌಜಲಗಿ ಶ್ರೀನಿವಾಸರಾವ್, ಶ್ರೀನಿವಾಸ್ ರಾವ್ ಮಂಗಳವೇಧೆ, ಕೆಂಗಲ್ ಹನುಮಂತಯ್ಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಸ್ ನಿಜಲಿಂಗಪ್ಪ, ಟಿ ಮರಿಯಪ್ಪ, ಸುಬ್ರಹ್ಮಣ್ಯ, ಸೌಕಾರ್ ಚೆನ್ನಯ್ಯ, ಎಚ್.ಕೆ.ವೀರಣ್ಣಯ್ಯ, ಎಚ್.ಬಿ.ಎಸ್.ಕಕ್ಕಿಲ್ಲಾಯ, ಬಿ.ವಿ.ಕಕ್ಕಿಲ್ಲಾಯ ಮತ್ತು ಅನಕೃ ಈ ಚಳುವಳಿಯಲ್ಲಿ ಭಾಗವಹಿಸಿದ್ದರು.ಈ ದಿನ ಕರ್ನಾಟಕ ತಾಯಿ ಭುವನೇಶ್ವರಿ ಅವರ ಭವ್ಯ ಮೆರವಣಿಗೆ ಆಗುತ್ತದೆ ಮತ್ತೆ ಈ ದಿನ ಇಡೀ ರಾಜ್ಯವು ಕನ್ನಡ ಹಬ್ಬವನ್ನು ಆಚರಿಸುತ್ತದೆ.

ಜೈ ಹಿಂದ್, ಜೈ ಕರ್ನಾಟಕ ಮಾತೆ

ನಿಮ್ಮೆಲ್ಲರಿಗೂ ಕರ್ನಾಟಕ ರಾಜ್ಯೋತ್ಸವ ದಿನದ ಶುಭಾಶಯಗಳು

Article By

Akshata Ningannavar

Brains Media Solutions

Kannada Religious by Brains Media Solutions Pvt. Ltd. : 111841453
Saroja Huddar 1 year ago

ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಷಯಗಳು

The best sellers write on Matrubharti, do you?

Start Writing Now