Quotes by Prashanth B in Bitesapp read free

Prashanth B

Prashanth B

@prashanthb738483

ಬಿಡುಗಡೆ, ಬೇಕಿಲ್ಲ ನೀವಾಗಲೇ ಮುಕ್ತರು..!! ಈ ಶೀರ್ಷಿಕೆ ನಿಮಗೆ ಗೊಂದಲ ಉಂಟು ಮಾಡಿದೆಯೇ?
ಹಾಗಾದರೆ ಈ ಕವನ ಓದಿಕೊಳ್ಳಿ... ಈ ಒಡಲು ಬಂಧನದಲ್ಲಿ ಇದೆ, ಮನಸ್ಸು ಬಂಧನದಲ್ಲಿ ಇದೆ... ಆದರೆ ಅವನ್ನು ಅರಿವ ಅರಿವಿಗೆ ಬಂಧನವಿಲ್ಲ... ಅದು ನಿತ್ಯ ಮುಕ್ತ...

ಓ ಮನವೆ

ಓ ಮನವೆ, 
ಸರಿದು ಹೋಗುವ ಮುನ್ನ, ಬರಿದಾಗ ಒಮ್ಮೆ 
ನಿ ಯಾರಿಂದು ಕೇಳು, ಓ ಮನವೆ. 
ನನ್ನ ಹೆಸರು, ಕುಲ, ಗೋತ್ರ, ನೆನವು, ನನಗೆ ಗೊತ್ತೆಂದೆನ್ನ ಬೇಡ, 
ಎಲ್ಲ ನಾ ಬಲ್ಲೆನೆನಬೇಡ. 
ಹೆಸರು, ಕುಲ, ಗೋತ್ರ, ನೆನವುಗಳಾಚೆ, 
ನಿ ಯಾರೆಂದು ಕೇಳು, ಓ ಮನವೆ. 

ಓ ಮನವೆ, 
ಯಾವುದರ ಅರಿವು ನಿನಗಿದೆಯೋ, ಅದು ನೀನಲ್ಲ. 
ಆ ಮಾಮರದ ಅರಿವು ನಿನಗಿದೆ, 
ಆ ಮಾಮರವು ನೀನಲ್ಲ. 
ಆ ಸದ್ದಿನ ಅರಿವು ನಿನಗಿದೆ, 
ಆ ಸದ್ದು ನೀನಲ್ಲ. 
ಮಾವಿನ ರುಚಿಯ ಅರಿವು ನಿನಗಿದೆ, 
ಆ ರುಚಿಯು ನೀನಲ್ಲ. 
ಗಂಧದ ಘಮದ ಅರಿವು ನಿನಗಿದೆ, 
ಆ ಘಮವು ನೀನಲ್ಲ. 
ರೇಷ್ಮೆಯ ನುಣುಪಿನ ಅರಿವು ನಿನಗಿದೆ, 
ಆ ನುಣುಪು ನೀನಲ್ಲ. 

ಓ ಮನವೆ, 
ಸರಿದು ಹೋಗುವ ಮುನ್ನ ಬರಿದಾಗ ಒಮ್ಮೆ 
ನಿ ಯಾರೆಂದು ಕೇಳು. 
ಈ ಒಡಲ ಅರಿವು ನಿನಗಿದೆ, 
ಈ ಒಡಲು ನೀನಲ್ಲ. 
ಈ ಯೋಚನೆಗಳ ಅರಿವು ನಿನಗಿದೆ, 
ಈ ಯೋಚನೆಗಳು ನಿನಲ್ಲ, ಓ ಮನವೆ. 
ಕೆಟ್ಟ ಯೋಚನೆಗಳು ನೀನಲ್ಲ, 
ಒಳ್ಳೆ ಯೋಚನೆಗಳು ನೀನಲ್ಲ. 
ಆತಂಕವೂ ನೀನಲ್ಲ, ಓ ಮನವೆ. 
ನಿನಗೆ ಅವೆಲ್ಲದರ ಅರಿವಿದೆ, 
ನಿ ಯೋಚನೆಗಳಲ್ಲ, ಓ ಮನವೆ. 

ಒಮ್ಮೆ ಯೋಚನೆಗಳು ನಿಂತೊಡನೆ ನಿರಾಳ, 
ಆ ನಿರಾಳದ ಅರಿವು ನಿನಗಿದೆ, 
ಆ ನಿರಾಳವು ನೀನಲ್ಲ, ಓ ಮನವೆ. 

ಹಾಗಾದರೆ, ಯಾರು ನೀ ಹೇಳು ಮನವೆ. 
ಈ ಅರಿವೇ ನೀನು, ಮನವೆ. 
ನೋಡು, ನಿನಗಿಲ್ಲ ಯಾವ ಆಕಾರ, 
ನೋಡು, ನಿನಗಿಲ್ಲ ಯಾವ ಮಿತಿ, 
ನೋಡು, ನಿನಗಿಲ್ಲ ಯಾವ ಪರಿಧಿ. 
ನೋಡು ಓ ಮನವೆ, ಕೊನೆಮೊದಲಿಲ್ಲ ನಿನಗೆ. 

ಎಲ್ಲವನರಿವೆ ನೀನು, 
ನಿನ್ನ ನೀನು ಅರಿವೆ. 

ಹೊರಗುರುವನು ಹುಡುಕಬೇಡ ಮನವೆ, 
ಈ ಅರಿವೆ ನಿನ್ನ ಗುರುವು. 
ನಿನಗೆ ನೀನೇ ದೀವಿಗೆ, 
ನಿನಗೆ ನೀನೇ ಬೆಳಕು. 
ಈ ಅರಿವೆ ಬೆಳಕು, 
ನೀನೇ ಆ ಬೆಳಕು.

ಅರ್ಥಸಾರ (ಭಾವಾನುವಾದ)
ಈ ವಚನದಲ್ಲಿ ಕವಿ ಮನಸ್ಸಿಗೆ ಕೇಳುತ್ತಾರೆ — “ನೀ ಯಾರು?” 
ನೀನು ಅರಿವಿನ ಸಾಕ್ಷಿ, ಆದರೆ ಅರಿತ ವಸ್ತುಗಳಲ್ಲ. 
ದೇಹ, ಯೋಚನೆ, ಭಾವನೆ — ಇವು ನಿನ್ನಲ್ಲ. 
ಅವುಗಳ ಅರಿವು ನಿನಗಿದೆ, ಆದರೂ ಅವು ನೀನಲ್ಲ. 
ಆದ್ದರಿಂದ ಹೊರಗುರುವನ್ನೇ ಹುಡುಕಬೇಡ; 
ನಿನ್ನೊಳಗಿನ ಅರಿವೇ ನಿನ್ನ ಗುರು, ನಿನ್ನ ದೀವಿಗೆ, ನಿನ್ನ ಬೆಳಕು.

ಸಾರಾಂಶವಾಗಿ — “ಮನಸ್ಸು ನಿನ್ನವಲ್ಲ, ಅರಿವು ನೀನು.” ✨

Read More