ಸ್ವಲ್ಪ ಹೊತ್ತು ಮಲಗಿ ಎದೇಳುವಾಗ  ಅವಳ ಕಿರು ಬೆರಳುಗಳು ಉರಿಯಲು ಶುರುವಾಗುತ್ತದೆ . ಅವಳು ಎದ್ದು ಕುಳಿತು ಏನಾಯಿತೆಂದು ಬೆರಳನ್ನು ಉಜ್ಜುತ್ತಾಳೆ 
ಆಗ ಅವಳ ಕೈಯಲ್ಲಿ ಒಂದು ಉಂಗುರ  ಪ್ರತ್ಯಕ್ಷವಾಗುತ್ತದೆ , ಅದರಿಂದ ಒಂದು ಕಮಲದ ಹೂ ಹೊರಗೆ ಬರ್ತ್ತದೆ .

ಸಾರಿಕೆಗೆ  ಅಚ್ಚರಿಯಾಗುತ್ತದೆ , ಆ ಹೂ ಗಾಳಿಯಲ್ಲಿ ತೇಲುತ್ತಾ ಇತ್ತು ಮತ್ತು ಆ ಕಮಲದ ಹೂವಿನ ಸುಗಂದ ಇಡೀ ಕೋಣೆಯನ್ನು ಆವರಿಸಿಕೊಂಡಿತ್ತು . ಅದನ್ನು ಮುಟ್ಟಲು ಸಾರಿಕೆ ಕೈಯನ್ನು ಮುಂದೆ ಚಾಚುವ ಸಮಯಕ್ಕೆ ಆ ಹೂ ಒಂದು ಹುಡುಗಿ ರೂಪಕ್ಕೆ ಬರುತ್ತದೆ . 

ಆ ಹುಡುಗಿ ಅಳುತ್ತಾ ಇರುತ್ತಾನಳೆ ...
ಸುರಭಿ ಅವನ ಅಳು ಕೇಳಲಾಗದೆ ,
" ಏ  ಯಾಕೆ ಅಲ್ತಿದ್ದಿಯ  " .
ಆ ಹುಡುಗಿ ಕಣ್ಣೀರು ಒರೆಸುತ್ತಾ  ,
" ಒಡತಿ ನಾನು ನಿಮ್ಮ ಬ್ರಾಹ್ಮೀ  ಶಕ್ತಿ , ನೀವು ಮತ್ತೆ ನನ್ನ ಆ ಲೋಕಕ್ಕೆ ಕಲಿಸ್ ಬೇಡಿ ; ನೀವು  ಮತ್ತೆ ನನ್ನ  ಆ ಲೋಕಕ್ಕೆ ಕಲಿಸಿದ್ರೆ ,  ನನ್ನನ್ನು  ಅವರು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲವೆಂದು .  ನನ್ನ ನಾಶ ಮಾಡ್ತಾರೆ  ,  ದಯಮಾಡಿ  ನನ್ನ ಕಳಿಸ್ ಬೇಡಿ ಒಡತಿ" .
ಎಂದು ಹೇಳಿ  ಜೋರಾಗಿ ಅಳಲು ಶುರು ಮಾಡಿದಳು ,
ಅವಳ ಮಾತುಗಳ ಕೇಳಿ ಸುರಭಿಯು ಪ್ರಶ್ನಿಸುತ್ತಾಳೆ .
ನಿನ್ನ ಹೆಸರು ಏನು ?? 
ಅದು ಯಾವ ಲೋಕ ??? 
ಅವರು ಯಾಕೆ  ನಿನ್ನನ್ನು  ಸಾಯಿಸ್ತರೆ ?? .
ಆ ಹುಡುಗಿ ಅವಳ ಪ್ರಶ್ನೆಗಳಿಗೆ ಉತ್ತರಿಸಲು ಶುರು ಮಾಡಿದಳು .....
"  ಮಿಂಚು ಅಂತ ನನ್ನ ಹೆಸರು , ನಾನು ವೀರ್ಯ ಲೋಕದಲ್ಲಿ ಇರುತ್ತೇನೆ , ಆ ಲೋಕದಲ್ಲೇ ಎಲ್ಲಾ ಬ್ರಾಹ್ಮೀ  ಶಕ್ತಿಗಳು ವಾಸವಗಿರುವುದು . ಅಲ್ಲಿ ಒಂದು ನಿಯಮ ಇದೆ ಯಾವ ಮನುಷ್ಯ ಅವನ ಬ್ರಾಹ್ಮೀ  ಶಕ್ತಿಯನ್ನು ಬೇಡ ಎಂದು ತಿರಸ್ಕರಿಸಿ ಮತ್ತೆ ಅದೇ ಲೋಕಕ್ಕೆ ಕಳುಯಿಸಿದರೆ , ಆ ಶಕ್ತಿಯನ್ನು ನಿಷ್ಕ್ರಿಯ ಮಾಡಲಾಗುತ್ತದೆ ಅಂದರೆ ಸಾಯಿಸಲಾಗುತ್ತದೆ " .                                      
ಎಂದು ಹೇಳುತ್ತ ಕಣ್ಣೀರು ಸುರಿಸಲು ಪ್ರಾರಂಭಿಸುತ್ತಾಳೆ ..
ಅವಳ ಮಾತುಗಳ ಕೇಳಿ ಸುರಭಿಯು ಹೇಳುತ್ತಾಳೆ .
" ನೀನು ಕೇವಲ ಒಂದು ಹೂ , ನಿನ್ನಿಂದ ನನಗೆ ಏನೂ ಲಾಭ ".
ಮಿಂಚು ಅದನ್ನು ಕೇಳಿ ಜೋರಾಗಿ ಅಳುತ್ತಾ ಹೇಳುತ್ತಾಳೆ ,
" ಒಡತಿ ನಾನು ಸಸ್ಯ  ಬ್ರಾಹ್ಮೀ  ಶಕ್ತಿ ,  ನಾನು ವಿವಿಧ  ರೋಗಗಳ ಗುಣ ಮಾಡುವ ಮದ್ದಿನ ಪರಿಚಯವಿದೆ . ಮತ್ತು ನನ್ನ  ಕಮಲದ ಹೂವಿಂದ ದೊರೆಯುವ ಬೀಜ ಸೇವಿಸಿದರೆ ಅವರ ರಕ್ತದಲ್ಲಿ ಇರುವ ಎಲ್ಲ ಕಲ್ಮಷಗಳನ್ನು ದೂರಮಾಡುತ್ತದೆ . ಆಗು ನನ್ನ ಕಣ್ಣೀರನ್ನು  ಔಷಧಿಯಾಗಿ ಸೇವಿಸಿದರೆ  ರೋಗಗಳು ಗುಣವಾಗುದು ನನ್ನ  ಅಂತಗಳು ಬದಲಾದಂತೆ ಇನ್ನೂ ಹೆಚ್ಚು ಶಕ್ತಿಯನ್ನು ಪಡೆಯುತ್ತೇನೆ . ದಯಮಾಡಿ  ನನ್ನ ಪುನಃ ಆ ವೀರ್ಯ ಲೋಕಕ್ಕೆ ಕಲಿಸದಿರಿ " .
ಎಂದು ಹೇಳುತ್ತ ಅಳುತ್ತಾಳೆ ,
ಸುರಭಿ ಅವಳ ಅವಸ್ಥೆ ನೋಡಿ ಹೇಳುತ್ತಾಳೆ ....
ನೀನು ಎಲ್ಲಿಗೂ ಹೋಗುವ ಅಗತ್ಯ ಇಲ್ಲ , ಇಲ್ಲೇ ಇರು . 
ಎಂದು ಹೇಳುತ್ತಾಳೆ .  
ಅದನ್ನು ಕೇಳಿ ಮಿಂಚು ಖುಷಿಯಲ್ಲಿ ಕುಣಿದಾಡುತ್ತಳೆ , ಅದೇ ಸಂದರ್ಭಕ್ಕೆ ಯಾರೋ ಬಂದು ಬಾಗಿಲು ಬಡಿಯುತ್ತಾರೆ  . ಅದನ್ನು ಕೇಳಿ ಸುರಭಿ ಮಿಂಚುಗೆ  ಹೇಳುತ್ತಾಳೆ , 
ಮೊದಲು ಹೋಗು ಇಲ್ಲಿಂದ ಯಾರಾದರೂ ನಿನ್ನ  ನೋಡಿದರೆ , ತೊಂದರೆಯಾಗುತ್ತದೆ .
ಎಂದು ಹೇಳಿದ ತಕ್ಷಣ ಮಿಂಚು ಉಂಗುರದ  ಒಳಗೆ ಹೋಗುತ್ತಾಳೆ ,  ಸುರಭಿ ಹೊರಗೆ ಬಾಗಿಲು ಬಡಿಯುವವರನ್ನು 
" ಒಳಗೆ ಬನ್ನಿ " .
ಎಂದು ಹೇಳುತ್ತಾಳೆ ,  ಹೊರಗೆ ಬಾಗಿಲು ಬಡಿಯುತ್ತಿದ್ದವರು ಒಳಗೆ ಬಂದರು . ಅದನ್ನು ನೋಡಿ ಅವಳಿಗೆ ಶಾಕ್ ಆಗುತ್ತದೆ , ಅದು ಬೇರೆ ಯಾರೂ ಅಲ್ಲ ಆ ಬೆಕ್ಕು ಮತ್ತು   ಅದರ ಬಾಯಿಯಲ್ಲಿ ಒಂದು ಪಾತ್ರವಿತ್ತು  ,  ಸುರಭಿ ಆ ಪಾತ್ರವನ್ನು ತೆಗೆದು ಕೊಳ್ಳುತ್ತಾಳೆ . ಆ ಬೆಕ್ಕು ಅವಳನ್ನು ದಿಟ್ಟಿಸುತ್ತಾ ,
" ಅದು ನನ್ನ ಒಡೆಯ ನಿನಗೆ ಕೊಡಲು ಹೇಳಿದರು" . 
ಎಂದು ಹೇಳಿ ಅಲ್ಲಿಂದ ಹೋಗುತ್ತದೆ . ಸುರಭಿ ಆ ಪಾತ್ರವನ್ನು ಓದಲು ಎಂದು ತೆರೆಯುವಾಗ   ಅಲ್ಲಿ  ಅರ್ಯ ಬರುತ್ತಾನೆ . 
ಏನು ಅತ್ತೆ ಮಗಳೇ , ಯಾರ ಪತ್ರವನ್ನು  ಓದುತ್ತಿದ್ದಿಯ 
ಎಂಬ ಮಾತು ಕೇಳಿ ,  ಬೆಚ್ಚಿ ಬಿದ್ದು ಅವನು ಇರುವ ಕಡೆ ತಿರುಗಿದಳು  .  ಸುರಭಿಯು ಅವನನ್ನು ನೋಡಿ  ಕೋಪದಿಂದ ; 
ನಿಂಗೆ ಯಾಕೆ ?? 
ಎಂದು ಹೇಳುತ್ತಾಳೆ . ಅವಳ  ಕೋಪವನ್ನು ನೋಡಿ ಮುಗುಳು ನಗುತ್ತಾ 
ಕೋಪ ಮಾಡ್ಕೋ ಬೇಡ ಅತ್ತೆ ಮಗಳೇ , ನಿನ್ನ ನೋಡೋಕೆ ಅಂತ ಬಂದೆ ಅಷ್ಟೇ . ನಿನ್ನ ಕೈಯಲ್ಲಿ ಇರುವ ಪತ್ರದ ಬಗ್ಗೆ  ತಿಳಿಯುವ ಕುತೂಹಲ ನಂಗಿಲ್ಲ .
ಎಂದು ಹೇಳುತ್ತ ಅವಳನ್ನು ನೋಡಿ ಕಣ್ಣು ಹೊಡೆಯುತ್ತಾನೆ . ಅವನ ಮುಖವನ್ನು ನೋಡಿ ಏನು ಪ್ರತಿಕಿಯೆ ನೀಡದೆ  ಆಸನದ ಮೇಲೆ ಕುಳಿತುಕೊಳ್ಳುತ್ತಳೆ ,  ಅಲ್ಲಿಂದ ಪತ್ರ ತೆಗೆದು ಓದಲೆಂದು  ತೆರೆಯುವಾಗ  . ಆರ್ಯ ಬಂದು ಅವಳ ಕೈಯಲ್ಲಿ ಇದ್ದ ಪತ್ರವನ್ನು  ತೆಗೆದುಕೊಳ್ಳುತ್ತಾನೆ .  
ಸುರಭಿ ಕೋಪದಿಂದ ಆರ್ಯ  ಬಳಿ ಬಂದು 
" ಕೊಡು ಆರ್ಯ , ನಂಗೆ ಪತ್ರ  ಕೊಡು " .
ಎಂದು ಹೇಳಿ ಅವನ ಕೈಯಿಂದ  ಪತ್ರ ಕಸಿದುಕೊಳ್ಳಲು 
ಪ್ರಯತ್ನಿಸುತ್ತಾಳೆ . ಆರ್ಯ ಅವಳನ್ನು ನೋಡಿ ನಕ್ಕು ಅವಳಿಗೆ ಆ ಪತ್ರವನ್ನು ಪುನಃ ನೀಡಿ  ಅಲ್ಲಿಂದ ಹೊರಟು ಹೋಗುತ್ತಾನೆ .  
ಆರ್ಯ ಹೋಗುದನ್ನು ಖಾತರಿಪಡಿಸಿಕೊಂಡು , ಪತ್ರ ವನ್ನು ಓದಲು ತೆರೆಯುತ್ತಾಳೆ . ...............
( ಆ ಪಾತ್ರದಲ್ಲಿ ಅಂತ ಯಾವ ವಿಷಯವಿದೆ ???? . 
ಮಿಂಚುವಿನ ಶಕ್ತಿ   ಸುರಭಿಗೆ ಯಾವ ರೀತಿ ಸಹಾಯ ಮಾಡಬಹುದು ???? ..... 18 ವರ್ಷದಿಂದ  ಹಾಸಿಗೆಯಲ್ಲೆ ಇರುವ ವಾಸುದೇವ ನನ್ನು ಹೇಗೆ ಸರಿ ಮಾಡುತ್ತಾಳೆ ?? ...  )