ನಂದನೂರಿನ ಮೂರು ಹೃದಯಗಳು

   ನಂದನೂರಿನ ಮೂರು ಹೃದಯಗಳು (ಕೂಲಿ ಕಾರ್ಮಿಕರ ಬದುಕು-ಪ್ರೇಮ ಕಥೆ)ಲೇಖಕ–ವಾಮನಾಚಾರ್ಯ  ಬೆಂಗಳೂರು ನಗರದಿಂದ ಇಪ್ಪತ್ತೈದು ಕಿಲೋಮೀಟರ್ ದೂರ ಇರುವ ಬಡಾವಣೆ ನಂದನೂರು. ವಿವೇಕಾನಂದ ಮುಖ್ಯ ರಸ್ತೆ ಪಕ್ಕದಲ್ಲಿ ಬಹು ಮಹಡಿ ಅಂತಸ್ತಿನ ವಿಶಾಲವಾದ ಕಲ್ಯಾಣ್ ಮಹೇಶ್ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಕಟ್ಟಡ ಕೆಲಸ ಭರದಿಂದ ಸಾಗುತ್ತಿತ್ತು. ವಿಶೇಷವೆಂದರೆ, ಬಿಲ್ಡರ್ ರಿಂದ ಹಿಡಿದು ಕೂಲಿ ಕಾರ್ಮಿಕ ರೆಲ್ಲರೂ ಉತ್ತರ ಕರ್ನಾಟಕದವರೇ ಆಗಿದ್ದರು.ಕಲಬುರ್ಗಿ ಜಿಲ್ಲೆಯ ಯಾಳಗಿಯಿಂದ ಬಂದ ಇಪ್ಪತ್ತೈದು ವರ್ಷದ ಯುವಕ ಶಿವು ಗಾರೆ ಕೆಲಸ ಮಾಡುತ್ತಿದ್ದ. ಬಿಲ್ಡರ್ ಸೋಮಶೇಖರ್ ಪಾಟೀಲ್ ಅವರಿಗೆ ಗೆ ಅತ್ಯಂತ ನಂಬಿಕಸ್ಥ. ಶಿವು ತನ್ನ ತಾಯಿ ಗಂಗಮ್ಮ ಜೊತೆಗೆ ಶೆಡ್ ನಲ್ಲಿ ವಾಸವಾಗಿದ್ದ. ರಾಯಚೂರು ಹತ್ತಿರ ಇರುವ ಗುಂಜನಾಳ ಗ್ರಾಮದ ಕೂಲಿ ಕೆಲಸ ಮಾಡಲು ಬಂದ ತೆಳ್ಳಗೆ,ಬೆಳ್ಳಗೆ, ನೀಟಾದ ಜಡೆ ಇರುವ ಹದಿನೆಂಟರ ಸುಂದರ ಹುಡುಗಿ ಅಂಬಿ ಅವನ ಪ್ರೇಯಸಿ. ಅಂಬಿಗೆ ಕೂಡಾ ಶಿವು ಎಂದರೆ  ಅಪಾರ ಪ್ರೀತಿ. ಇಬ್ಬರೂ ಶೀಘ್ರದಲ್ಲೇ ಮದುವೆ ಆಗಿ ಎಂದು ಶಿವು ನ ತಾಯಿ ಗಂಗಮ್ಮ ನ‌ ಒತ್ತಾಯಿಸುತ್ತಿದ್ದಳು. ಸುಮಾರು ಒಂದು