ತನ್ನ ತಂದೆಯ ಸಾವಿನ ಕಹಿ ನೆನಪುಗಳನ್ನು ಹಿಡಿದುಕೊಂಡು ನಮ್ಮ ಮನೆಯಿಂದ ಒಂಟಿಯಾದ ಈ ಜೀವನವನ್ನು ಪ್ರವಾಸ ಮಯ ಮಾಡಲು ಪ್ರವಾಸಕ್ಕೆ ಹೋಗುವ ಮನಸ್ಸು ಮಾಡಿದೆ ..... ಅಲ್ಲಿಂದ ನನ್ನ ಪ್ರಯಾಣನ ಬೆಳೆಯಿತು ಮಲೆನಾಡಿನ ಕಡೆಗೆ ......ಮಲೆನಾಡಿನ ರಮಣೀಯ ಸ್ಥಳಕ್ಕೆ ಒಬ್ಬನೇ ಬೈಕ್ ಏರಿ ಹೋದೆ ನಾನು ....... ಮಂಜಿನ ಮಳೆಯಲ್ಲಿ ಕುಣಿಯುತ್ತಿರುವ ಸಣ್ಣಕೆ ಜಿನುಗುವ ತುಂತುರು ಮಳೆ ಹನಿ , ತಂಪಾದ ಗಾಳಿಯನ್ನು ನೆನೆಯುತ ಬೈಕ್ನಲ್ಲಿ ಕಾತರದಿಂದ ಆಗುಂಬೆಯ ಕಡೆಗೆ ಸಾಗಿದೆ ... ಹೇಗೋ ನಾನು ಆಗುಂಬೆಯನ್ನು ತಲುಪಿದೆ ...ಆಗುಂಬೆಯ ವನಸಿರಿಯ ಹಸಿರು ರಾಶಿಯನ್ನು ನನ್ನ ಕಂಗಳು ಅಚ್ಚರಿಯಿಂದ ಸಂಭ್ರಮಿಸಿ ... ಕ್ಷಣ ಕಾಲ ನನ್ನ ಎಲ್ಲ ನೋವುಗಳನ್ನು ಮರೆತು ಮುಂದೆ ಸಾಗಿದೆನು ಒಂಟಿಯಾಗಿ ...... ಸಾಗುವಾಗ ಜೊತೆಗಾರರು ಯಾರದರು ಇದ್ದರೆ ಒಳ್ಳೆಯದಿತ್ತೆಂದು ನೆನೆಯುತ್ತಿತ್ತು ಈ ಮನ, ಆದರೆ ಜೊತೆಯಾಗಿ ಬರಳೆಂದು ಯಾರಿಗೂ ಅನಿಸಿರಲಿಲ್ಲ ...ಆಗುಂಬೆಯ ಸೂರ್ಯಸ್ತಮಾನ ವೀಕ್ಷಣ ಸ್ಥಳದಲ್ಲಿ ನಿಂತು ಮಲೆನಾಡಿನ ಸೊಬಗನ್ನು ಸವಿಯುತ್ತಾ ಅಲ್ಲೇ ಸೆಲ್ಫಿ ತೆಗೆದೆನು.ಒಂಟಿತನದ ಊರಿಗೆನಾನೊಬ್ಬನೆ ಸಾಹುಕಾರ .... ನನ್ನ ಹಗಲು ರಾತ್ರಿಗೇಏಕಾಂತವೆ ಜೊತೆಗಾರ ..... ಹಗಲೆಲ್ಲ