ಬುದ್ಧಿ ಬರಲು ಕೆಡಲೇಬೇಕೇನು?

​ಒಂದು ಕಾಲದಲ್ಲಿ, ಪಶ್ಚಿಮ ಘಟ್ಟಗಳ ನಡುವೆ, ದಟ್ಟವಾದ ಅರಣ್ಯದ ಒಳಭಾಗದಲ್ಲಿ ಸಿದ್ಧಪುರ ಎಂಬ ಗ್ರಾಮವಿತ್ತು. ಅಲ್ಲಿಯ ಜನರು ಪ್ರಕೃತಿಯನ್ನು ಆರಾಧಿಸುವವರು. ಹಳ್ಳಿಯ ಜೀವನ ಕ್ರಮ ನಿಗದಿಯಾಗಿತ್ತು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಹಾಗಿದ್ದರೂ, ಆ ಗ್ರಾಮದಲ್ಲಿ ಒಬ್ಬ ಯುವಕ ಇದ್ದ, ಅವನ ಹೆಸರು ಚೇತನ್. ಅವನೊಬ್ಬ ಬುದ್ಧಿವಂತ ಮತ್ತು ಅದ್ಭುತ ಪ್ರತಿಭಾವಂತ. ಆದರೆ ಅವನಿಗೆ ಎಲ್ಲದರಲ್ಲೂ ಅಸಡ್ಡೆ. ತಾನು ಎಲ್ಲರಿಗಿಂತ ದೊಡ್ಡವನು, ತಾನು ಮಾಡುವ ಕೆಲಸಗಳೇ ಸರಿ ಎಂಬ ಅಹಂಕಾರ.​ಚೇತನ್‍ಗೆ ಒಂದು ಗಿಡದ ಬಗ್ಗೆ ಸಂಶೋಧನೆ ಮಾಡುವುದು ದೊಡ್ಡ ಕನಸಾಗಿತ್ತು. ಆ ಗಿಡದ ಹೆಸರು ಜೀವಮೂಲಿಕಾ ಅದರ ಬಗ್ಗೆ ಒಂದು ದಂತಕಥೆ ಇತ್ತು. ಆ ಗಿಡದ ಎಲೆಯನ್ನು ಅರೆದು ಸೇವಿಸಿದರೆ, ಯಾವುದೇ ರೋಗವನ್ನು ಗುಣಪಡಿಸಬಹುದು, ಎಂದು ಹೇಳಲಾಗುತ್ತಿತ್ತು. ಆದರೆ, ಆ ಗಿಡ ಅಪರೂಪದ್ದು. ಅದನ್ನು ಹುಡುಕಿಕೊಂಡು ಹೋದವರು ಮರಳಿ ಬಂದಿಲ್ಲ.​ಗ್ರಾಮದ ಮುಖ್ಯಸ್ಥರಾದ ಹಿರಿಯ ದಾದಾ ಚೇತನ್‍ಗೆ ಹೇಳಿದರು. ಚೇತನ್, ಜೀವಮೂಲಿಕೆಯನ್ನು ಹುಡುಕುವುದಕ್ಕೆ ಹೋಗಬೇಡ. ಅದು ಅಪಾಯಕಾರಿ. ನೀನು ಇಲ್ಲಿಯೇ ನಿನ್ನ